ಕರ್ಮಸಮರ್ಪಣೆಯಲ್ಲಿ ಹೇಳಬೇಕಾದ ಶ್ಲೋಕ
ಶ್ರೀಮದ್ ರಾಮಾಯಣ, ಶ್ರೀಮನ್ ಮಹಾಭಾರತ ಮುಂತಾದ ಸಕಲ ಶಾಸ್ತ್ರಗಳ ಅರ್ಥವನ್ನು ನಿರ್ಣಯಿಸುವ ಶ್ರೀಮನ್ ಮಹಾಭಾರತತಾತ್ಪರ್ಯನಿರ್ಣಯ ಎಂಬ ಪರಮಾದ್ಭುತ ಕೃತಿಯನ್ನು ವಿರಚಿಸಿ, ಆ ಗ್ರಂಥವನ್ನು ಶ್ರೀಹರಿಗೆ ಸಮರ್ಪಿಸುವ ಸಂದರ್ಭದಲ್ಲಿ ಶ್ರೀಮದಾಚಾರ್ಯರು ರಚಿಸಿರುವ, ಆ ಗ್ರಂಥದ ಕಡೆಯಲ್ಲಿರುವ ಶ್ಲೋಕ. ಇಡಿಯ ದಿವಸದ ಸತ್ಕರ್ಮಗಳನ್ನು ದೇವರಿಗೆ ರಾತ್ರಿ ಸಮರ್ಪಿಸುವ ಸಂದರ್ಭದಲ್ಲಿ, ಪ್ರತಿಯೊಂದು ಸತ್ಕರ್ಮವನ್ನು ಸಮರ್ಪಿಸುವ ಸಂದರ್ಭದಲ್ಲಿ ಮಾಡಬೇಕಾದ ಅನುಸಂಧಾನ ಪ್ರಾರ್ಥನೆಗಳನ್ನು ತಿಳಿಸುವ ಈ ದಿವ್ಯಶ್ಲೋಕದ ಅರ್ಥಾನುಸಂಧಾನ ಇಲ್ಲಿದೆ. ಯಃ ಸರ್ವಗುಣಸಂಪೂರ್ಣಃ ಸರ್ವದೋಷವಿವರ್ಜಿತಃ । ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮೇ ಪರಮಃ ಸುಹೃತ್।
Play Time: 4:48, Size: 5 MB