02/10/2016
ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಬದರಿಕಾಶ್ರಮಕ್ಕೆ ಬಂದು ಅಲಕನಂದಾತೀರದ ಶ್ರೀಮನ್ನಾರಯಣನಿಗೆ ಸಾಷ್ಟಾಂಗವೆರಗಿ ಗೀತಾಭಾಷ್ಯವನ್ನು ಸಮರ್ಪಿಸುತ್ತಾರೆ. ಆ ಬಳಿಕ ನಾರಾಯಣನ ಮುಂದೆ ಕುಳಿತು ಸಮಗ್ರ ಗೀತಾಭಾಷ್ಯದ ವಾಚನವನ್ನು ಮಾಡುತ್ತಾರೆ. ಸಮಗ್ರವನ್ನು ಆಲಿಸಿದ ನಾರಾಯಣ, ಪ್ರತಿಮೆಯಿಂದಲೇ ಆಚಾರ್ಯರೊಡನೆ ಮಾತನಾಡಿ, ಮಂಗಳಾಚರಣ ಶ್ಲೋಕದಲ್ಲಿದ್ದ ಶಕ್ತಿತಃ ಎಂಬ ಪದದ ಬದಲಾಗಿ ಲೇಶತಃ ಎಂಬ ಪದವನ್ನಿಡು ಎಂದು ಆಜ್ಞೆ ಮಾಡುತ್ತಾನೆ. ಆಚಾರ್ಯರ ಗೀತಾಭಾಷ್ಯದ ಮಾಹಾತ್ಮ್ಯ, ಆ ಮೊಟ್ಟ ಮೊದಲ ಶ್ಲೋಕದಲ್ಲಿಯೇ ಆಚಾರ್ಯರು ಮಾಡಿದ ಕ್ರಾಂತಿ, ಪರಮಾತ್ಮನಿಗೆ ಗೀತಾಭಾಷ್ಯದ ಮೇಲಿರುವ ಪ್ರೇಮ ಇವೆಲ್ಲವನ್ನೂ ಈ ಉಪನ್ಯಾಸದಲ್ಲಿ ಕೇಳುತ್ತೇವೆ. ಶ್ರೀಮದಾಚಾರ್ಯರ ಗ್ರಂಥಗಳೆಡಗಿನ ನಮ್ಮ ಭಕ್ತಿಯನ್ನು ಇಮ್ಮಡಿಗೊಳಿಸುವ ಭಾಗ ಶ್ರೀಮಧ್ವವಿಜಯದ ಆರನೆಯ ಸರ್ಗದ ಈ ಭಾಗ.
Play Time: 45:50
Size: 8.05 MB