24/02/2017
ಹಗೆಯರಿಗೆ ವರವೀವರಿಬ್ಬರು, ತೆಗೆಯಲರಿಯರು ಕೊಟ್ಟ ವರಗಳ ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬ್ರಹ್ಮದೇವರು ಕೊಟ್ಟವರವನ್ನು ಬ್ರಹ್ಮದೇವರಿಗೆ ಸಮಾನರಾದ ಮುಖ್ಯಪ್ರಾಣದೇವರು ಮೀರಿರುವದನ್ನು ಹತ್ತಾರು ಕಡೆಯಲ್ಲಿ ಕಾಣುತ್ತೇವೆ. ಬ್ರಹ್ಮದೇವರ ವರವನ್ನು ವಾಯುದೇವರಿಗೆ ಮೀರಲಿಕ್ಕೆ ಸಾಧ್ಯ ಎಂದ ಬಳಿಕ ಬ್ರಹ್ಮದೇವರಿಗೂ ಸಾಧ್ಯ ಎಂದು ನಿರ್ಣೀತವಾಯಿತು. ಅಂದ ಮೇಲೆ ದಾಸರಾಯರು ಹೀಗೆ ಹೇಳಿದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸರೇ ನೀಡಿರುವ ಉತ್ತರವನ್ನು — ಶ್ರೀಮಧ್ವಸಿದ್ಧಾಂತದ ಶ್ರೇಷ್ಠ ಸಿದ್ಧಾಂತವನ್ನು — ನಾವಿಲ್ಲಿ ಕೇಳುತ್ತೇವೆ. ದಾಸಸಾಹಿತ್ಯ ಎಷ್ಟು ಗಂಭೀರ ಎನ್ನುವದಕ್ಕೆ ದೃಷ್ಟಾಂತವಾಗಿ ನಿಲ್ಲುವ ಪದ್ಯವಿದು. ತಪ್ಪದೇ ಕೇಳಿ. ತೆಗೆದು ಕೊಡುವ ಸಮರ್ಥರಾರೀ ಎಂಬ ಅದ್ಭುತವಾಕ್ಯದ ಅರ್ಥಾನುಸಂಧಾನದೊಂದಿಗೆ.
Play Time: 27:05
Size: 5.20 MB