29/08/2017
ಭಕ್ತಿದೇವತೆಯೊಂದಿಗೆ ಮಾತನಾಡುತ್ತಿರುವ ಶ್ರೀನಾರದರು, ಕಲಿಯುಗದ ದೋಷಗಳನ್ನೂ ಹೇಳಿ, ಭಕ್ತಿಯ ಮಾಹಾತ್ಮ್ಯವನ್ನೂ ತಿಳಿಸಿ ಈ ದುಷ್ಟ ಕಲಿಯುಗದಲ್ಲಿಯೂ ಸರ್ವಸಜ್ಜನರ ಮನಸ್ಸಿನಲ್ಲಿ ಭಕ್ತಿಯನ್ನು ಸ್ಥಾಪಿಸುತ್ತೇನೆ ಎಂಬ ದಿವ್ಯವಾದ ಪ್ರತಿಜ್ಞೆಯನ್ನು ಮಾಡುತ್ತಾರೆ. ಭಕ್ತಿಯ ಮಾಹಾತ್ಮ್ಯವರ್ಣನೆಯಿಂದ ಭಕ್ತಿದೇವತೆಗೆ ಪುಷ್ಟಿ ದೊರೆಯುತ್ತದೆ. ಆದರೆ, ಆ ಭಕ್ತಿಯ ಮಕ್ಕಳಾದ ಜ್ಞಾನ, ವೈರಾಗ್ಯಗಳನ್ನು ಎಬ್ಬಿಸಲು ಸಾಧ್ಯವಾಗದೇ ಇದ್ದಾಗ, “ಮಹಾಸತ್ಕರ್ಮದ ಆಚರಣೆಯಿಂದ ಇವರು ಪುಷ್ಟರಾಗುತ್ತಾರೆ, ಜ್ಞಾನಿವರೇಣ್ಯರು ನಿಮಗೆ ಆ ಸತ್ಕರ್ಮವೇನು ಎನ್ನುವದನ್ನು ತಿಳಿಸುತ್ತಾರೆ” ಎಂಬ ಅಶರೀರವಾಣಿಯಾಗುತ್ತದೆ. ಆ ಸಾಧುಗಳು ಯಾರು ಎಂದು ಅರಸಿಕೊಂಡು ಶ್ರೀನಾರದರು ಬದರಿಕಾಶ್ರಮಕ್ಕೆ ಬಂದು ಸನಕಾದಿಯೋಗಿವರ್ಯರನ್ನು ಭೇಟಿಯಾಗುವ ಪ್ರಸಂಗದವರೆಗಿನ ಚಿತ್ರಣ ಇಲ್ಲಿದೆ.
Play Time: 43:26
Size: 7.84 MB