03/09/2017
ಧುಂಧುಕಾರಿ ಐದು ಜನ ವೇಶ್ಯೆಯರನ್ನು ಮನೆಯಲ್ಲಿ ತಂದಿಟ್ಟುಕೊಂಡು ಪರಮಪಾಪಿಷ್ಠನಾಗಿ ಬದುಕುತ್ತಿರುತ್ತಾನೆ. ಅವನು ಮಾಡುತ್ತಿದ್ದ ಕಳ್ಳತನ ಕೊಲೆಗಳು ರಾಜನಿಗೆ ತಿಳಿದರೆ ಇವನ ಜೊತೆಯಲ್ಲಿ ತಮ್ಮನ್ನೂ ರಾಜ ಕೊಲ್ಲುತ್ತಾನೆ ಎಂದು ಆಲೋಚನೆ ಮಾಡಿದ ವೇಶ್ಯೆಯರು ರಾತ್ರಿಯಲ್ಲಿ ಧುಂಧುಕಾರಿಯನ್ನು ಕೊಂದು ಹಾಕುತ್ತಾರೆ. ತನ್ನ ಮಹತ್ತರ ಪಾಪಕರ್ಮಗಳಿಂದ ಪಿಶಾಚಜನ್ಮವನ್ನು ಪಡೆದ ಧುಂಧುಕಾರಿಯನ್ನು ಗೋಕರ್ಣ ಭಾಗವತಸಪ್ತಾಹದಿಂದ ಉದ್ಧಾರ ಮಾಡುವ ದಿವ್ಯ ಘಟನೆ ಮತ್ತು ಗೋಕರ್ಣ ಹಾಗೂ ಎಲ್ಲ ಶ್ರೋತೃಗಳ ಉದ್ಧಾರವಾಗುವ ಘಟನೆಗಳ ಚಿತ್ರಣ ಇಲ್ಲಿದೆ. ಆಚಾರ್ಯರ ವಾಕ್ಯಗಳ ಆಧಾರದ ಮೇಲೆ ಭಾಗವತಶ್ರವಣದಿಂದ ಮುಕ್ತಿಯಾಗುವದು ಎಂದರೇನು ಎನ್ನುವ ತತ್ವದ ವಿವರಣೆಯೂ ಇಲ್ಲಿದೆ.
Play Time: 61:04
Size: 7.72 MB