08/03/2020
ಋಷ್ಯಶೃಂಗರು ಹುಟ್ಟಿನಿಂದ ಹೆಣ್ಣನ್ನೇ ಕಂಡಿಲ್ಲ, ಹೀಗಾಗಿ ಹೆಣ್ಣಿನ ಪ್ರಲೋಭನೆಯನ್ನೊಡ್ಡಿ ಅವರನ್ನು ನಮ್ಮ ರಾಜ್ಯಕ್ಕೆ ಕರೆತರಬಹುದು ಎಂದು ಆಲೋಚಿಸಿದ ರೋಮಪಾದ ನಗರದ ವೇಶ್ಯೆಯರಿಗೆ ಈ ಕಾರ್ಯ ಮಾಡಲು ತಿಳಿಸುತ್ತಾನೆ. ಆದರೆ ಶಾಪದ ಭಯದಿಂದ ಅವರ್ಯಾರೂ ಸಿದ್ಧರಾಗದೇ ಇದ್ದಾಗ ಮುದಿ ವೇಶ್ಯೆಯೊಬ್ಬಳು ಬಂದು ತಾನು ಕೇಳುವ ಪದಾರ್ಥಗಳನ್ನು ನೀಡಿದರೆ ನಾನು ಪ್ರಯತ್ನಿಸುತ್ತೇನೆ ಎನ್ನುತ್ತಾಳೆ. ಅವಳು ಕೇಳಿದ ಎಲ್ಲ ವ್ಯವಸ್ಥೆಯೂ ಆಗುತ್ತದೆ. ತನ್ನ ಮಗಳನ್ನೇ ಸಿದ್ಧಗೊಳಿಸಿ ಆ ಮುದುಕಿ ಋಷ್ಯಶೃಂಗರನ್ನು ಕರೆತರುವ ಸಾಹಸಕ್ಕೆ ಕೈ ಹಾಕುತ್ತಾಳೆ. ಆ ವೇಶ್ಯೆಯರು ಮಾಡಿದ ಸಾಹಸ, ಋಷ್ಯಶೃಂಗರ ಮುಗ್ಧತೆಯ ಚಿತ್ರಣ ಇಲ್ಲಿದೆ. ಒಟ್ಟಾರೆ ಈ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠಗಳ ಚಿಂತನೆ ಇಲ್ಲಿದೆ. ಬ್ರಹ್ಮಚರ್ಯ, ಸಮಾಜರಕ್ಷಣೆ ಮುಂತಾದ ವಿಷಯಗಳಲ್ಲಿ ಹುಚ್ಚುಚ್ಚು ಆಲೋಚನೆಗಳು ಸಲ್ಲದು ಎಂಬ ತತ್ವದ ನಿರೂಪಣೆಯೊಂದಿಗೆ.
Play Time: 56:04
Size: 1.37 MB