ಶ್ರೀಮದ್ ರಾಮಾಯಣಮ್ — 79
ತಮಸಾ ನದಿಯ ತೀರದಲ್ಲಿ ರಾತ್ರಿ ಜನರೆಲ್ಲರೂ ಮಲಗಿದ್ದಾಗ ಮಧ್ಯರಾತ್ರಿಯಲ್ಲಿ ರಾಮ-ಸೀತಾ-ಲಕ್ಷ್ಮಣ-ಸುಮಂತ್ರರು ರಥವನ್ನೇರಿ ಹೊರಡುವ ಪ್ರಸಂಗದ ವಿವರಣೆ ಇಲ್ಲಿದೆ. ಮೂಡುವ ಎಲ್ಲ ಪ್ರಶ್ನೆಗಳ ಉತ್ತರೊಂದಿಗೆ.
(You can only view comments here. If you want to write a comment please download the app.)
Pranesh,Bangalore
11:59 PM, 30/06/2020
ಆಚಾರ್ಯರಿಗೆ ನಮಸ್ಕಾರಗಳು
ಪ್ರವಚನ ಅದ್ಭುತವಾಗಿ ಮೂಡಿ ಬರುತ್ತಿದೆ ಹೀಗೆ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾಥನೆಗಳು.
ಒಂದು ಪ್ರಶ್ನೆ ವಾಲ್ಮೀಕಿ ರಾಮಾಯಣದ 6.16.33 ಶ್ಲೋಕದಲ್ಲಿ ಶ್ರೀ ಪ್ರಭು ರಾಮಚಂದ್ರ
ಸಕೃದೇವ ಪ್ರಪನ್ನಾಯ ತವಾಸ್ಮಿಚ ಇತಿಚ ಯಾಚತೆ
ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮ
ಎಂದು ಒಂದು ಬಾರಿ ಶರಣಾದರೆ ಅವರಿಗೆ ಅಭಯವನ್ನು ಕೊಡುತ್ತೇನೆ ಎನ್ನುವ ವ್ರತದ ದೇವರು
ಅವನನ್ನು ಹಿಂಬಾಲಿಸಿ ಸಮಗ್ರ ಭೋಗ ಭಾಗ್ಯಗಳನ್ನು ತೊರೆದು ಸರ್ವಾತ್ಮನಾ ಶ್ರೀ ರಾಮನೇ ನಮಗೆ ಸ್ವಾಮಿ ಎಂದು ಬಂದ ಜನರನ್ನು ಹೇಳದೆ ಬಿಟ್ಟು ಹೋದದ್ದು ಯಾಕೆ ಇದು ಅವನ ವ್ರತಕ್ಕೆ ಭಂಗ ಬರಲಿಲ್ಲವೇ.
Vishnudasa Nagendracharya
ಇಲ್ಲಿ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸಿ ಜನರು ಶರಣಾಗತರಾಗಿ ಬಂದಿರುವದಲ್ಲ.
ಪ್ರೇಮದಿಂದ ಹಿಂಬಾಲಿಸಿ ಬರುತ್ತಿರುವದು.
ಅವರನ್ನು ಕರೆದುಕೊಂಡು ಹೋದರೆ,
೧. ರಾಜ್ಯ ನಾಗರೀಕರಿಂದ ಶೂನ್ಯವಾಗುತ್ತದೆ,
೨. ವನವೇ ನಗರವಾಗಿಬಿಡುತ್ತದೆ
೩. ಪ್ರಜೆಗಳಿಗೆ ಕಾಡಿನಲ್ಲಿ ಅಪಾರ ಸಮಸ್ಯೆ ಯಾತನಗಳುಂಟಾಗುತ್ತವೆ
೪. ಪ್ರಜೆಗಳಿಂದ ತಪಸ್ವಿಗಳಿಗೆ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ
ಈ ಎಲ್ಲ ಕಾರಣಕ್ಕೆ ಸ್ವಾಮಿ ತನ್ನೊಡನೆ ಕರೆದೊಯ್ಯುವದಿಲ್ಲ,.
ಎಲ್ಲದಕ್ಕಿಂತ ಮುಖ್ಯವಾಗಿ ರಾಮನ ವನವಾಸ ಆ ಜನರನ್ನು ಪರಮಾದ್ಭುತ ಆಧ್ಮಾತ್ಮಿಕ ಎತ್ತರಕ್ಕೆ ಕೊಂಡೊಯ್ಯುತ್ತದೆ. ಮುಂದೆ ಕೇಳುತ್ತೇವೆ, ಅದನ್ನು.
Manukumara A,Anthanahalli
8:00 PM , 30/06/2020
🙏 ಶ್ರೀ ಗುರುಭ್ಯೋ ನಮಃ ಗುರುಗಳಿಗೆ ನಮಸ್ಕಾರಗಳು ಗುರುಗಳೇ ರಾತ್ರಿಯ ವೇಳೆ ಯ ಸಮಯದಲ್ಲಿ ನದಿಯನ್ನು ದಾಟಬಾರದು ಅಂತ ಹೇಳಿದ್ರಿ ಆದರೆ
ಸೀತಾ ಸಮೇತನಾದಾ ರಾಮಚಂದ್ರ ದೇವರು ನದಿಯನ್ನು ಮದ್ಯ ರಾತ್ರಿ ಯಲ್ಲಿಯೇ ದಾಟುತ್ತರಲ್ಲ ಗುರುಗಳೇ 🙏
Vishnudasa Nagendracharya
ಸಾಮಾನ್ಯ ಧರ್ಮ ಬೇರೆ, ಅನಿವಾರ್ಯವಾದ ಆಪದ್ಧರ್ಮ ಬೇರೆ.
ಬೆಳಗಿನ ಜಾವದ ವರೆಗೆ ಉಳಿದುಕೊಂಡರೆ ಇಡಿಯ ಜನರಿಗೆ ಮತ್ತಷ್ಟು ದುಃಖ ನೀಡಬೇಕಾಗುತ್ತದೆ.