ಡಾ. ವಿಠೋಬಾಚಾರ್ಯರಿಗೆ ಉತ್ತರ
ಆರಾಧನೆ ಮತ್ತು ಪೂರ್ವಾಶ್ರಮಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಉಳಿದ ಉತ್ತರಗಳು ಲೇಖನದಲ್ಲಿವೆ. VNA267
ಶ್ರೀ ವಿದ್ಯಾಶ್ರೀಶತೀರ್ಥರಿಗೆ ಬಹಿರಂಗ ಪ್ರಶ್ನೆಗಳು
ಶ್ರೀ ವ್ಯಾಸರಾಜಮಠದ ವಿದ್ಯಾಶ್ರೀಶತೀರ್ಥರಿಗೆ ಹಲವು ಬಹಿರಂಗ ಪ್ರಶ್ನೆಗಳು.
ಪೇಜಾವರರು ಮತ್ತು ಇಫ್ತಾರ್ ಕೂಟ
ಸಮಗ್ರ ಹಿಂದೂಗಳ ಶ್ರದ್ಧಾಕೇಂದ್ರವಾದ ಶ್ರೀಮದುಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀ ಪೇಜಾವರ ಸ್ವಾಮಿಗಳು ಮುಸಲ್ಮಾನರಿಗೆ ಇಫ್ತಾರ್ ಕೂಟ ನೀಡಿದ್ದು ಒಬ್ಬ ಸಾಮಾನ್ಯ ಹಿಂದೂವಿನ ಮತ್ತು ಭಗವದ್ಗೀತೆಯ ದೃಷ್ಟಿಯಿಂದ ಯಾಕಾಗಿ ತಪ್ಪು ಎನ್ನುವದರ ನಿರೂಪಣೆ ಇಲ್ಲಿದೆ. ವೇದಧರ್ಮಗಳಲ್ಲಿ ವಿಶ್ವಾಸವಿಟ್ಟ ಒಬ್ಬ ಸಾಮಾನ್ಯ ಮನುಷ್ಯನಿಗೆ ಇದರಿಂದ ಯಾಕಾಗಿ ಆಘಾತವಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸತ್ಯಾತ್ಮರು ಹೇಳಿದ ಸುಳ್ಳುಕಥೆ
ಶ್ರೀವ್ಯಾಸರಾಜರಿಗೆ ವೃದ್ಧಾಪ್ಯವಾಗಿದ್ದಾಗ ನ್ಯಾಯಾಮೃತಕ್ಕೆ ಖಂಡನೆ ಬಂದಿತೆಂದೂ, ಅದನ್ನು ಓದುವಷ್ಟೂ ಸ್ಥಿತಿ ಶ್ರೀ ವ್ಯಾಸರಾಜರಿಗೆ ಇರಲಿಲ್ಲವೆಂದೂ, ಅವರ ಶಿಷ್ಯರಿಗೂ ಖಂಡನೆ ಬರೆಯಲು ಆಗಲಿಲ್ಲವೆಂದೂ, ಅದಕ್ಕಾಗಿ ಶ್ರೀ ವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀ ರಘೂತ್ತಮರ ಬಳಿಗೆ ಕಳುಹಿಸಿದರೆಂದೂ ಉತ್ತರಾದಿ ಮಠದ ಸತ್ಯಾತ್ಮರು ಹೇಳಿದ ಕಟ್ಟುಕತೆಯ ಖಂಡನೆ ಇಲ್ಲಿದೆ.
ಅತಿರಿಕ್ತ ಏಕಾದಶೀ
ಸಕಲ ಮಾಧ್ವರಿಗೂ ಒಂದೇ ಏಕಾದಶಿ ಆಗಬೇಕು ಎನ್ನುವದು ಪ್ರತಿಯೊಬ್ಬ ಸಜ್ಜನ ಮಾಧ್ವನ ಆಶಯ ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಅದು ಹೇಗಾಗಲು ಸಾಧ್ಯ? ಉತ್ತರ ಸುಲಭವಿದೆ — ಏಕಾದಶಿಯನ್ನು ಹೇಗೆ ಲೆಕ್ಕಾಚಾರ ಹಾಕುತ್ತಾರೆ ಎನ್ನುವದನ್ನು ಪ್ರತಿಯೊಬ್ಬ ಮಾಧ್ವನೂ ಕಲಿಯಬೇಕು. ಏಕಾದಶಿ ಎಂದರೆ ಗಣಿತ. ಎರಡಕ್ಕೆ ಎರಡು ಸೇರಿದರೆ ನಾಲ್ಕು ಆಗಲೇಬೇಕು. ಮೂರು ಎಂದು ಬರೆದಿದ್ದಾರೆ ಎಂದರೆ ಲೆಕ್ಕಾಚಾರ ತಪ್ಪಾಗಿದೆ ಎಂದೇ ಅರ್ಥ. ಅವರು ಹೇಳಿದ್ದಾರೆ ನಾವು ಅನುಸರಿಸುತ್ತೇವೆ ಎಂಬ ಅಂಧಾನುಕರಣೆಯನ್ನು ಬಿಟ್ಟು ಏಕಾದಶಿಯ ಕುರಿತ ಲೆಕ್ಕಾಚಾರವನ್ನು ಪ್ರತಿಯೊಬ್ಬರೂ ಕಲಿತಲ್ಲಿ ಯಾರು ಎಲ್ಲಿ ಎಡವುತ್ತಿದ್ದಾರೆ ಎನ್ನುವದು ಅತ್ಯಂತ ಸ್ಪಷ್ಟವಾಗುತ್ತದೆ. ಸಾಮಾನ್ಯ ಮಾಧ್ವನಿಗೆ ಏಕಾದಶಿಯ ಲೆಕ್ಕಾಚಾರವನ್ನು ಕಲಿಸುವಲ್ಲಿ ಇದು ನನ್ನ ಅಳಿಲು ಸೇವೆ. ಇದೇ ವಿಷಯದ ಕುರಿತ ಲೇಖನವೂ ಪ್ರಕಟವಾಗಿದೆ. [VNA215]
ಪ್ರಾಯಿಕತ್ವ ಶಬ್ದಾರ್ಥ ವಿಚಾರ
ಶ್ರೀ ಕಂಬಾಲೂರು ರಾಮಚಂದ್ರತೀರ್ಥಶ್ರೀಪಾದಂಗಳವರ ವ್ಯಾಖ್ಯಾನದ ಮೇಲಿನ ಆಕ್ಷೇಪಕ್ಕೆ ಉತ್ತರ ಶ್ರೀಮದಾಚಾರ್ಯರು ಮತ್ತು ಶ್ರೀಮಟ್ಟೀಕಾಕೃತ್ಪಾದರು ಪ್ರಯೋಗ ಮಾಡಿರುವ ಪ್ರಾಯಿಕತ್ವ ಎನ್ನುವ ಶಬ್ದಕ್ಕೆ ಪ್ರಾಚುರ್ಯ ಎಂದು ಶ್ರೀಮದ್ ರಾಮಚಂದ್ರತೀರ್ಥಗುರುಸಾರ್ವಭೌಮರು ಮತ್ತು ಶ್ರೀಮದ್ ಭಾಷ್ಯದೀಪಿಕಾಚಾರ್ಯರು ಅರ್ಥವನ್ನು ಹೇಳಿದ್ದಾರೆ. ಆ ಅರ್ಥವನ್ನು ಮತ್ತು ಅದರ ವಿವರಣೆಯ ಕುರಿತು ಕೆಲವರು ಮಾಡಿರುವ ಆಕ್ಷೇಪಕ್ಕೆ ಇಲ್ಲಿ ವಿಸ್ತೃತವಾದ ಉತ್ತರವನ್ನು ನೀಡಿ, ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಕೋಶಗ್ರಂಥಗಳ ಮತ್ತು ಲೌಕಿಕಪ್ರಯೋಗಗಳ ಆಧಾರವನ್ನು ನೀಡಿ ಪ್ರಾಯಿಕತ್ವ ಎಂಬ ಶಬ್ದಕ್ಕೆ ಪ್ರಾಚುರ್ಯ ಎನ್ನುವದೇ ವಾಚ್ಯಾರ್ಥ, ಪ್ರಾಧಾನ್ಯ ಅಲ್ಲ ಎನ್ನುವದನ್ನು ಪ್ರತಿಪಾದಿಸಿ ಶ್ರೀಪದ್ಮನಾಭತೀರ್ಥಶ್ರೀಪಾದಂಗಳವರ ಸನ್ನ್ಯಾಯರತ್ನಾಯವಲೀ ಮುಂತಾದ ಆಧಾರಗಳನ್ನು ನೀಡಿ ಶ್ರೀರಾಮಚಂದ್ರತೀರ್ಥಗುರುಸಾರ್ವಭೌಮರು ಹೇಳಿದ ಅರ್ಥ ಸಾಂಪ್ರದಾಯಿಕ ಅರ್ಥ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನದ ಸಂಖ್ಯೆ VNA214
ದಶಮಿ, ದ್ವಾದಶಿಗಳ ರಾತ್ರಿ ಏನನ್ನು ಸ್ವೀಕರಿಸಬಹುದು?
ದ್ವಾದಶಿಯ ದಿನ ಪಾರಣೆ ಆದ ನಂತರ ಏನನ್ನಾದರೂ ಸ್ವೀಕಾರ ಮಾಡಬಹುದೇ, ಇಲ್ಲವೇ? — ವಿಜಯ್ ಕುಮಾರ್. ಕೆ.