ಜೀವನ ಸ್ವಭಾವ ಬದಲಾಗುತ್ತದೆಯೇ?
ಆಚಾರ್ಯರೆ, ಸ್ವಭಾವತಃ ದುಷ್ಟರಾದ ಜೀವ ಯಾರಾದರೂ ಅತಿಶಯವಾದ ಭಗವದಾರಾಧನೆ ಮಾಡಿ ಆನಂದದ ಮೋಕ್ಷ ಪಡೆದಿರಯವ ಉದಾಹರಣೆಗಳು ಪುರಾಣಗಳಲ್ಲಿ ಇವೆಯಾ? ಜೀವನ ಸ್ವಭಾವದಲ್ಲಿ ಬದಳಾವಣೆ ಬರಲಿಕ್ಕೆ ಸಾಧ್ಯತೆ ಇದೆಯೆ? — ರೂಪಾ ಇಲ್ಲ. ದೇವರು ಜೀವರ ಸ್ವಭಾವವನ್ನು ಎಂದಿಗೂ ಬದಲಿಸುವದಿಲ್ಲ. ದುಷ್ಟರಾದ ಜೀವರು ಎಂದಿಗೂ ಭಗವದಾರಧನೆ ಮಾಡುವದಿಲ್ಲ. ಮಹಾಪಾಪಗಳನ್ನು ಮಾಡಿದ ಸಜ್ಜೀವರು ಅನನ್ಯವಾಗಿ ಭಗವದಾರಾಧನೆ ಮಾಡಿ ಮುಕ್ತಿಯನ್ನು ಪಡೆದ ಸಾವಿರಾರು ದೃಷ್ಟಾಂತಗಳಿವೆ. ಆದರೆ ಒಬ್ಬ ದುರ್ಜೀವನೂ ದೇವರಿಗೆ ಶರಣಾಗುವದಿಲ್ಲ, ದೇವರ ಆರಾಧನೆ ಮಾಡುವದಿಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ