ಭೀಷ್ಮರ ನಿರ್ಯಾಣ
ಕುರುಕ್ಷೇತ್ರದ ಯುದ್ಧದಲ್ಲಿ ನಾನು ಆಯುಧವನ್ನು ಹಿಡಿಯುವದಿಲ್ಲ ಎಂದು ಶ್ರೀಕೃಷ್ಣ ತಿಳಿಸಿರುತ್ತಾನೆ. ಆದರೆ, ಕೃಷ್ಣನ ಕೈಯಲ್ಲಿ ಆಯುಧವನ್ನು ನಾನು ಹಿಡಿಸಿಯೇ ಹಿಡಿಸುತ್ತೇನೆ ಎಂದು ಭೀಷ್ಮಾಚಾರ್ಯರು ಪ್ರತಿಜ್ಞೆ ಮಾಡಿರುತ್ತಾರೆ. ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರ್ಣ ಮಾಡಲೋಸುಗ ಶ್ರೀಕೃಷ್ಣ, ಮೃದುವಾಗಿ ಯುದ್ಧ ಮಾಡುತ್ತಿದ್ದ ಅರ್ಜುನನನ್ನು ಎಚ್ಚರಿಸಲು, ಒಮ್ಮೆ ಚಕ್ರವನ್ನು ಹಿಡಿದು ಭೀಷ್ಮರನ್ನು ಕೊಲ್ಲ ಹೋಗುತ್ತಾನೆ. ಆ ಪ್ರಸಂಗವನ್ನು ನೆನೆಯುತ್ತ ಭೀಷ್ಮಾಚಾರ್ಯರು ದೇವರ ಕಾರುಣ್ಯ ಮಾಹಾತ್ಮ್ಯಗಳನ್ನ ಚಿಂತಿಸುತ್ತಾರೆ. ಮಹಾಭಾರತದ ವಚನಗಳ ಉಲ್ಲೇಖದೊಂದಿಗೆ ಆ ಪ್ರಸಂಗವನ್ನು ನಿರೂಪಿಸಿ, ದೇವರನ್ನು ಕಾಣುತ್ತಲೇ ಭೀಷ್ಮರು ದೇಹತ್ಯಾಗ ಮಾಡುವ ಸಂದರ್ಭದ ವಿವರಣೆ ಇಲ್ಲಿದೆ.
Play Time: 46:43, Size: 1.37 MB