20/02/2017
ವರವನ್ನು ಪಡೆದ ತ್ರಿಪುರಾಸುರರು ಮಯಾಸುರನ ಬಳಿಗೆ ಬಂದು ಮೂರು ಊರುಗಳನ್ನು ನಿರ್ಮಾಣ ಮಾಡಲು ಹೇಳುತ್ತಾರೆ. ಮಯಾಸುರ ತಾನೂ ತಪಸ್ಸಿನ ಆಚರಣೆ ಮಾಡಿ ವಿಶೇಷ ಶಕ್ತಿಯನ್ನು ಗಳಿಸಿ ಬಂಗಾರ, ಬೆಳ್ಳಿ, ಕಬ್ಬಿಣಗಳ ಮೂರು ಅದ್ಭುತ ಊರುಗಳನ್ನು ನಿರ್ಮಾಣ ಮಾಡುತ್ತಾನೆ. ತಾರಕಾಕ್ಷನ ಮಗ ಹರಿ ಎನ್ನುವ ದೈತ್ಯ ಬ್ರಹ್ಮದೇವರ ಕುರಿತು ತಪಸ್ಸು ಮಾಡಿ ಸತ್ತವರನ್ನು ಬದುಕಿಸುವ ಒಂದು ಕೆರೆಯನ್ನು ನಿರ್ಮಾಣ ಮಾಡುತ್ತಾನೆ. ಹೀಗೆ ಐಶ್ವರ್ಯ, ಶಕ್ತಿಗಳಿಂದ ಯುಕ್ತರಾದ ದೈತ್ಯರು ಸಜ್ಜನರನ್ನು ಹಿಂಸಿಸಲು ತೊಡಗಿದಾಗ ಇಂದ್ರದೇವರು ಅವರ ಮೇಲೆ ಯುದ್ಧ ಸಾರುತ್ತಾರೆ. ಆದರೆ ಬ್ರಹ್ಮದೇವರ ವರದ ರಕ್ಷೆಯಿದ್ದ ಅವರನ್ನು ಗೆಲ್ಲಲಾಗುವದಿಲ್ಲ. ನಂತರ ಬ್ರಹ್ಮದೇವರ ಆಜ್ಞೆಯಂತೆ ಸಮಸ್ತ ದೇವತೆಗಳೂ ಮಹಾರುದ್ರದೇವರ ಬಳಿ ಬಂದು ತ್ರಿಪುರಗಳ ಮತ್ತು ತ್ರಿಪುರಾಸುರರ ಸಂಹಾರಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಘಟನೆಗಳ ಚಿತ್ರಣ ಈ ಭಾಗದಲ್ಲಿದೆ.
Play Time: 35:13
Size: 6.07 MB