03/06/2017
ಶ್ರೀ ಶ್ರೀಪಾದರಾಜ-ಪಂಚರತ್ನಮಾಲಿಕಾ-ಸ್ತೋತ್ರಮ್ — 02/08 ಶ್ರೀ ಶ್ರೀಪಾದರಾಜರ ಗುಣಮಾಹಾತ್ಮ್ಯಗಳನ್ನು ಚಿಂತನೆ ಮಾಡಹೊರಟಿರುವ ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ ಗುರುಗಳಲ್ಲಿ ಮೊದಲು ಸ್ತೋತ್ರ ಮಾಡಿದ ಗುಣ — ರುಚಿತಮಹೃದಯಮ್ ಎಂದು. ತಮ್ಮ ಶಿಷ್ಯರ ಮೇಲೆ ವಾತ್ಸಲ್ಯದ ಪೂರವನ್ನು ಹರಿಸುತ್ತಿದ್ದ ಶ್ರೀಪಾದರಾಜರು, ತಮ್ಮ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರು. ಸ್ವರ್ಣವರ್ಣತೀರ್ಥಶ್ರೀಪಾದಂಗಳವರು, ವಿಬುಧೇಂದ್ರತೀರ್ಥಶ್ರೀಪಾದಂಗಳವರು ಮುಂತಾದ ತಮಗಿಂತ ದೊಡ್ಡವರ ವಾತ್ಸಲ್ಯವನ್ನು ಪಡೆದು, ಚಂದ್ರಿಕಾಚಾರ್ಯರಾದಿ ಶಿಷ್ಯರಿಗೆ ಆ ವಾತ್ಸಲ್ಯವನ್ನು ಧಾರೆಯೆರೆದ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. ಸ್ವರ್ಣವರ್ಣತೀರ್ಥರಿಗೆ ಮತ್ತು ಬ್ರಹ್ಮಣ್ಯತೀರ್ಥರಿಗೆ ತಮ್ಮ ಶಿಷ್ಯರಿಗೆ ಪಾಠ ಹೇಳುವಷ್ಟು ಜ್ಞಾನವಿರಲಿಲ್ಲ, ಅದಕ್ಕಾಗಿಯೇ ಅವರು ಗ್ರಂಥವನ್ನೂ ಬರೆದಿಲ್ಲ, ಆ ಕಾರಣಕ್ಕೆ ನಾವು ಅವರಿಗೆ ನಮಸ್ಕಾರ ಮಾಡುವದಿಲ್ಲ ಎಂದು ಹೇಳುವ ಜನ ಇವತ್ತಿಗೂ ಬದುಕಿದ್ದಾರೆ. ಅಂತಹವರಿಗೆ ಶ್ರೀಮಚ್ಚಂದ್ರಿಕಾಚಾರ್ಯರು ಮತ್ತು ಶ್ರೀ ಶ್ರೀನಿಧಿತೀರ್ಥಶ್ರೀಪಾದಂಗಳವರು ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ, ತಪ್ಪದೇ ಕೇಳಿ.
Play Time: 31:10
Size: 5.44 MB