02/11/2018
ಯಾವಯಾವ ದೇವತೆಯನ್ನು ಉಪಾಸನೆ ಮಾಡುವದರಿಂದ ಯಾವಯಾವ ಫಲಗಳುಂಟಾಗುತ್ತವೆ ಎನ್ನುವದನ್ನು ವಿಸ್ತಾರವಾಗಿ ತಿಳಿಸುವ ಶುಕಾಚಾರ್ಯರು ಪರಮಾತ್ಮನಲ್ಲಿ ಮಾಡುವ ಭಕ್ತಿಯಿಂದ ಸಕಲ ಐಹಿಕ ಫಲಗಳನ್ನೂ ಪಡೆಯಬಹುದು ಎನ್ನುವದನ್ನು ನಿರೂಪಿಸಿ ಶ್ರೀಮನ್ ನಾರಾಯಣನೇ ಸರ್ವಾರ್ಥಪ್ರದ, ಏನನ್ನು ಬೇಡಿದರೂ ಅವನಲ್ಲಿಯೇ ಬೇಡುವದೇ ಸರ್ವಶ್ರೇಷ್ಠ ಎನ್ನುವದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. ಭಾಗವತ ನಿರೂಪಿಸಲು ಹೊರಟಿದ್ದು “ಪ್ರೋಜ್ಝಿತಕೈತವ”ವಾದ ಅಂದರೆ ನಿಷ್ಕಾಮವಾದ ಕರ್ಮಗಳನ್ನು ನಿರೂಪಿಸಲು. ಅಂದಮೇಲೆ ಇಲ್ಲೇಕೆ ಸಕಾಮ ಕರ್ಮವನ್ನು ನಿರೂಪಿಸುತ್ತಿದೆ ಎಂಬ ಪ್ರಶ್ನೆಗೆ ಶ್ರೀ ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿರುವ ಪರಮಾದ್ಭುತ ಉತ್ತರದ ವಿವರಣೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ದೇವತೆಗಳನ್ನು ಆರಾಧಿಸಬೇಕಾದರೆ ಇರಬೇಕಾದ ಎಚ್ಚರ, ಮಾಡಬೇಕಾದ ಅನುಸಂಧಾನಗಳನ್ನು ತಿಳಿಸಲಾಗಿದೆ.
Play Time: 52:29
Size: 5.97 MB