16/04/2020
ಶ್ರೀಮದ್ ರಾಮಾಯಣಮ್ — 32 — ಶತಾನಂದರ ಸಂಭ್ರಮ ತಮ್ಮ ರಾಜ್ಯದ ಪ್ರಾಂತಕ್ಕೆ ರಾಮಲಕ್ಷ್ಮಣರೊಂದಿಗೆ ಆಗಮಿಸಿದ ವಿಶ್ವಾಮಿತ್ರರನ್ನು ಭಕ್ತಿ ಗೌರವಗಳಿಂದ ಜನಕಮಹಾರಾಜರು ಸ್ವಾಗತಿಸಿ ರಾಮಲಕ್ಷ್ಮಣರ ಕುರಿತು ಪ್ರಶ್ನೆ ಮಾಡಿ ತಿಳಿದುಕೊಳ್ಳುತ್ತಾರೆ. ಅಹಲ್ಯಾದೇವಿಯರ ಶಾಪವಿಮೋಚನೆಯ ಮಾತನ್ನು ಕೇಳುತ್ತಲೇ ಭಕ್ತಿ-ಉತ್ಸಾಹ-ಪ್ರೇಮ-ತವಕಗಳಿಂದ ಗೌತಮ-ಅಹಲ್ಯೆಯರ ಪುತ್ರ ಶತಾನಂದರು — ಜನಕರಾಜರ ಪುರೋಹಿತರು — ಮಾಡುವ ಪ್ರಶ್ನೆಗಳನ್ನು ಕೇಳುತ್ತೇವೆ. ನಮ್ಮ ಬದುಕನ್ನು ಬಂಗಾರಗೊಳಿಸುವ ಅದ್ಭುತ ಪಾಠಗಳೊಂದಿಗೆ. ಯಾಜ್ಞವಲ್ಕ್ಯರ ಶಿಷ್ಯರಾದ ಜನಕಮಹಾರಾಜರಿಗೆ ಶ್ರೀರಾಮ ಶ್ರೀಮನ್ನಾರಾಯಣನೇ ಎಂದು ತಿಳಿದಿದೆ, ಆದರೂ ಸಹ ವಿಶ್ವಾಮಿತ್ರರ ಶಿಷ್ಯನನ್ನಾಗಿಯೇ ಕಾಣುವದೇಕೆ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರವಿದೆ. ಪ್ರಾಚೀನ ಭಾರತದ ರಸ್ತೆಗಳ ಕುರಿತ ಅಪೂರ್ವವಿಷಯವನ್ನು ನಾವಿಲ್ಲಿ ಕೇಳುತ್ತೇವೆ.
Play Time: 48:12
Size: 1.37 MB