27/04/2020
ಶ್ರೀಮದ್ ರಾಮಾಯಣಮ್ — 35 ಸಕಲ ಇಂದ್ರಾದಿ ದೇವತೆಗಳಿಗೂ ಎತ್ತಲಿಕ್ಕೆ ಸಾಧ್ಯವಿಲ್ಲದ, ಮಹಾಬಲಿಷ್ಠವಾದ ಶಿವಧನುಷ್ಯವನ್ನು ಐರಾವತ ಕಬ್ಬಿನ ಜಲ್ಲೆಯನ್ನು ಲೀಲೆಯಿಂದ ಮುರಿಯುವಂತೆ ರಾಮದೇವರು ಮುರಿದು ಹಾಕಿದ ರೋಮಂಚಕಾರಿ ಪ್ರಸಂಗದ ಚಿತ್ರಣ. ಶ್ರೀರಾಮದೇವರು ಪ್ರತಿದಿವಸ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಬೇಕಾದರೆ ಸಾಮಾನ್ಯವಾದ ಧನುಷ್ಯವನ್ನೇ ಗುರುಗಳು ನೀಡುತ್ತಿದ್ದರು, ಅದನ್ನು ರಾಮದೇವರು ಹೆದೆಯೇರಿಸುತ್ತಿದ್ದರು, ಅವು ಮುರಿಯುತ್ತಿರಲಿಲ್ಲ. ಆದರೆ, ದೇವತೆಗಳಿಗೂ ಎತ್ತಲಿಕ್ಕಾಗದ ಶಿವಧನುಷ್ಯ ಮುರಿದು ಬಿತ್ತೇಕೆ? ಶಿವಧನುಷ್ಯದ ಮೇಲೆ ರಾಮದೇವರು ಹೆಚ್ಚಿನ ಶಕ್ತಿಯನ್ನು ಪ್ರಯೋಗ ಮಾಡಿದರು ಎಂದು ಹೇಳಿದರೆ, ಲೀಲೆಯಿಂದ ಧನುರ್ಭಂಗ ಮಾಡಿದುರು ಎಂಬ ವಾಲ್ಮೀಕಿ ರಾಮಾಯಣದ ಮಾತು ಕೂಡುವದಿಲ್ಲ. ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ.
Play Time: 31:16
Size: 7.24 MB