02/04/2022
ಶ್ರೀಮದ್ ರಾಮಾಯಣಮ್ — 89 ಮೊದಲಿಗೆ ರಾಮ ವನಕ್ಕೆ ಹೋದ ದುಃಖ, ಆ ದುಃಖದಿಂದ ಸಕಲದರಲ್ಲಿಯೂ ವೈರಾಗ್ಯ, ಆ ನಂತರ ಮೂಡಿದ ವಿವೇಕದಿಂದ ಆ ಅಯೋಧ್ಯೆಯ ಜನ “ರಾಮ” ಎಂಬ ಹೆಸರನ್ನು ಮಾತ್ರ ಬಳಸಿ, ಬೇರೆಯ ಶಬ್ದಗಳನ್ನು ಬಳಸದೇ ಜೀವಿಸಲು ಆರಂಭಿಸಿದ ಅದ್ಭುತ ವಿಷಯವನ್ನಿಲ್ಲಿ ಕೇಳುತ್ತೇವೆ. “ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್” ದೇವರ ಭಕ್ತರಿಗೆ ಎಂದಿಗೂ ಅಶುಭವಾಗುವದಿಲ್ಲ ಎಂದು ಮಹಾಭಾರತ ಪ್ರತಿಪಾದಿಸುತ್ತದೆ. “ನ ಮೇ ಭಕ್ತಃ ಪ್ರಣಶ್ಯತಿ” ಎಂದು ಸ್ವಯಂ ಶ್ರೀಕೃಷ್ಣ ತಿಳಿಸುತ್ತಾನೆ. ಆದರೆ ರಾಮನ ಭಕ್ತರು ಈ ಪರಿ ದುಃಖಕ್ಕೊಳಗಾದರಲ್ಲ, ಈ ಮಾತನ್ನು ಅರ್ಥ ಮಾಡಿಕೊಳ್ಳುವದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರಿವಿದೆ.
Play Time: 35:56
Size: 3.84 MB