02/04/2022
ಶ್ರೀಮದ್ ರಾಮಾಯಣಮ್ — 90 ದಾಂಪತ್ಯದಲ್ಲಿ ಯಾವುದೇ ದುಃಖಕ್ಕೆ ಸಿಟ್ಟಿಗೆ ಆ ಸದ್ಯದ ಪರಿಸ್ಥಿತಿ ಕಾರಣವಾದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಆದರೆ ಅದಕ್ಕೆ ಹಿಂದಿನ ಯಾವುದೋ ನೋವು ಕಾರಣವಾಗಿದ್ದರೆ ಅದು ತುಂಬ ಗಂಭೀರವಾದದ್ದು. ಸುದೀರ್ಘ ಕಾಲದ ನೋವು ಸ್ಫೋಟವಾದಾದ ಅದರ ಪರಿಣಾಮವೂ ಘೋರವಾಗಿರುತ್ತದೆ. ಇಂತಹ ಅತೀ ಗಂಭೀರವಾದ ವಿಷಯ ದಶರಥ-ಕೌಸಲ್ಯೆಯರ ಮಧ್ಯದಲ್ಲಿಯೂ ಮೂಡಿ ಬರುತ್ತದೆ. ಸಂಬಂಧವೇ ಪೂರ್ಣ ಕಡಿದುಹೋಗುವ ಪ್ರಸಕ್ತಿ ಇರುವಾಗ ಅದನ್ನು ಉಳಿಸುವ ಮಹತ್ಕಾರ್ಯವನ್ನು ಅತ್ಯಂತ ಚಾತುರ್ಯ ಮತ್ತು ನಿಷ್ಕಪಟವಾದ ಹೃದಯದಿಂದ ಮಾಡಿದವರು ಸುಮಿತ್ರಾದೇವಿಯರು. ಏಕಾಂತದಲ್ಲಿ ಪತಿಯನ್ನು ಪ್ರಶ್ನಿಸುವ ಕೌಸಲ್ಯಾದೇವಿಯರು, ಮನಃಪೂರ್ವಕವಾಗಿ ಕ್ಷಮೆಯಾಚಿಸುವ ದಶರಥರು, ಯಾವಾಗ ಏನು ಮಾತನಾಡಬೇಕು ಎನ್ನುವದನ್ನು ಅದ್ಭತವಾಗಿ ಆಚರಿಸಿ ತೋರಿಸುವ ಸುಮಿತ್ರಾದೇವಿಯರು ನಮಗೆ ಬದುಕಿನ ಪಾಠವನ್ನು ಕಲಿಸುತ್ತಾರೆ. ಶ್ರೀಮದ್ ರಾಮಾಯಣದ ಈ ಭಾಗ ಮತ್ತು ಮುಂದಿನ ಭಾಗಗಳು ನಮ್ಮ ಬದುಕನ್ನು ಬಂಗಾರಗೊಳಿಸುವ ಶ್ರೇಷ್ಠ ಪಾಠಗಳು.
Play Time: 37:10
Size: 3.84 MB