02/04/2022
ಶ್ರೀಮದ್ ರಾಮಾಯಣಮ್ — 96 ಸಿಂಹಾಸನದಲ್ಲಿ ಕುಳಿತ ರಾಮನನ್ನು ಕಾಣಬೇಕೆನ್ನುವದು ದಶರಥರ ಹೆಬ್ಬಯಕೆಯಾಗಿತ್ತು. ಸಾಧ್ಯವಾಗಿರಲಿಲ್ಲ. ವನವಾಸದಿಂದ ಹಿಂತಿರುಗಿದಾಗ ನಡೆಯಲಿರುವ ಘಟನೆಗಳನ್ನೇ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುತ್ತ ದಶರಥರು ಪ್ರಾಣತ್ಯಾಗ ಮಾಡುತ್ತಾರೆ. ದಶರಥರ ಮರಣ ಶ್ರವಣಋಷಿ ದಂಪತಿಗಳಿಗೆ ನೀಡಿದ ದುಃಖದ ಫಲ ಸರಿ, ಆದರೆ, ಭಗವಂತನನ್ನೇ ಮಗನನ್ನಾಗಿ ಪಡೆದರೂ ಈ ಪಾಪ ಹೋಗಲಿಲ್ಲವೇಕೆ? ಶ್ರೀರಾಮನ ಒಂದು ನಾಮಸ್ಮರಣೆ ಸಕಲ ಪಾಪಗಳನ್ನೂ ದುಃಖಗಳನ್ನೂ ಕಳೆಯುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ, ರಾಮಸ್ಮರಣೆಯಲ್ಲಿಯೇ ಜೀವವನ್ನು ತೇದ ದಶರಥರ ಆ ಪಾಪ ದುಃಖಗಳೇಕೆ ಪರಿಹಾರವಾಗಲಿಲ್ಲ. “ರೋಗಾನುಭವವೆಲ್ಲ ಉಗ್ರತಪವು” "ಕಷ್ಟದ ಅನುಭವಗಳೆಲ್ಲ ತಪಸ್ಸಾಗುತ್ತದೆ" ಎಂದು ದಾಸಸಾಹಿತ್ಯ ತಿಳಿಸುತ್ತದೆ. ಅದಕ್ಕಿಲ್ಲಿ ಜ್ವಲಂತ ದೃಷ್ಟಾಂತವನ್ನು ಕಾಣುತ್ತೇವೆ.
Play Time: 36:42
Size: 3.84 MB