02/04/2022
ಶ್ರೀಮದ್ ರಾಮಾಯಣಮ್ — 103 ಸಮಗ್ರ ಯೋಧರು, ಯೋಧಪತ್ನಿಯರು, ಆನೆ, ಕುದುರೆ, ಒಂಟೆ, ಗೋವು ಮುಂತಾದ ಸಮಸ್ತ ಪ್ರಾಣಿಗಳು, ಕೌಸಲ್ಯಾ, ಸುಮಿತ್ರಾ, ಕೈಕಯೀ ಮುಂತಾದ ಸಮಗ್ರ ರಾಜಪರಿವಾರ, ಬಾಲರು, ಬಾಲಿಕೆಯರು, ಯುವಕರು, ಯುವತಿಯರು, ವೃದ್ಧರು ವೃದ್ಧೆಯರು ಮೊದಲಾಗಿ ಇಡಿಯ ಅಯೋಧ್ಯೆಯ ಜನತೆ ಹೊರಟು ನಿಲ್ಲುವ ಭಕ್ತಿಸಂಭ್ರಮಯುಕ್ತವಾದ ಭಾಗವಿದು. ಅಯೋಧ್ಯೆಗೆ ಅಯೋಧ್ಯೆ ನಿರ್ಮಾನುಷವಾಗಿ ಬಿಡುತ್ತದೆ. ಊರ ಬಾಗಿಲು ಕಾಯಲಿಕ್ಕೆ ಸಹ, ದೇವಸ್ಥಾನಗಳಲ್ಲಿ ಪೂಜೆ ಮಾಡುವದಕ್ಕೆ ಸಹ, ಅರಮನೆಯನ್ನು ಸಂಪತ್ತನ್ನು ಕಾಯಲಿಕ್ಕೆ ಸಹ ಒಬ್ಬರೂ ಇರುವದಿಲ್ಲ. ರಾಮನಿಲ್ಲದ ಊರು ಬೇಡ, ರಾಮನ ಕಾಲಿಗೆ ಬಿದ್ದು ರಾಮನನ್ನು ಕರೆತರಲೇಬೇಕು ಎಂಬ ನಿಶ್ಚಯದಿಂದ ಹೊರಡುವ ಭಕ್ತಿಯ ಪರಾಕಾಷ್ಠೆಯ ಚಿತ್ರಣವಿದು.
Play Time: 30:46
Size: 3.84 MB